


ಸಂಕ್ರಾಂತಿಯ ಈ ವಾರ ಎಂಟು ಪರಭಾಷಾ ಚಿತ್ರಗಳು ಬಿಡುಗಡೆಯಗುತ್ತಿವೆ.. ತಮಿಳಿನ ಮೂರು ತೆಲುಗಿನ ಮೂರು ಹಿಂದಿ ಆಂಗ್ಲ ಭಾಷೆಗಳ ತಲಾ ಒಂದೊಂದು ಚಿತ್ರಗಳು ಕನ್ನಡ ನಾಡಿನ ಬೆಳ್ಳಿ ಪರದೆಗಳಲ್ಲಿ ರಾರಾಜಿಸಲಿವೆ. ಇವುಗಳ ನಡುವೆ ಕನ್ನಡದ ಏಕೈಕ ಚಿತ್ರ ಸೂರ್ಯಕಾಂತಿ ತೆರೆಕಾಣುತ್ತಿದೆ. ಕನ್ನಡದಲ್ಲಿ ಸಾಕಷ್ಟು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದರೂ ತೆರೆಕಾಣುವ ಭಾಗ್ಯ ಪಡೆದದ್ದು ಒಂದು ಚಿತ್ರ ಮಾತ್ರ. ಮೇನಕಾ, ಭೂಮಿಕಾ ಜೊತೆಗೆ ಈ ವಾರ ಅನುಪಮ (ಅಪರ್ಣಾ) ಚಿತ್ರಮಂದಿರ ಕೂಡ ತೆಲುಗರ ಪಾಲಾಗುತ್ತಿದೆ! ನಮ್ಮ ನಿರ್ಮಾಪಕರು ತಮ್ಮ ತಮ್ಮಲ್ಲೇ ತಾನು ಮೊದಲು ತಾನು ಮೊದಲು ಎಂದು ಬಿಡುಗಡೆಗಾಗಿ ಕಚ್ಚಾಟ ಮಾಡುತ್ತಿದ್ದರೆ ಪರಭಾಷೆಯವರು ತಣ್ಣನೆ ತಮ್ಮ ಚಿತ್ರಗಳನ್ನು ಬಿಡುಗಡೆಮಾಡುತ್ತಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬುದು ನಮ್ಮ ಚಿತ್ರರಂಗವನ್ನು ನೋಡಿ ಮಾಡಿದ ಗಾದೆ ಇರಬೇಕು…
ವಿಷ್ಣು ನಮ್ಮನ್ನಗಲಿದ್ದೇ ತಡ ಅವರ ಚಿತ್ರಗಳಿಗೆ ಭಾರೀ ಡಿಮ್ಯಾಂಡ್ ಬಂದು ಬಿಟ್ಟಿದೆ! ಹೊಸ ಚಿತ್ರಗಳಿಗಷ್ಟೇ ಅಲ್ಲ, ಅವರು ನಟಿಸಿದ ಹಳೆಯ ಚಿತ್ರಗಳಿಗೂ ಭಾರೀ ಬೇಡಿಕೆ! ಅದರಲ್ಲೂ ಅವರ ಅವಿಸ್ಮರಣೀಯ ಚಿತ್ರಗಳಲ್ಲೊಂದಾದ ಆಪ್ತ ಮಿತ್ರನಿಗೆ ಬೇಡಿಕೆ ಇಲ್ಲದೇ ಹೋದೀತೇ? ಸಂತೋಷ್ ಚಿತ್ರಮಂದಿರದಲ್ಲಿ ಅಮೋಘ ಒಂದು ವರ್ಷಗಳ ಕಾಲ ದಾಖಲೆಯ ಪ್ರದರ್ಶನ ಕಂಡಿದ್ದ ಆಪ್ತ ಮಿತ್ರ ಈ ವಾರ ಕಪಾಲಿಯಲ್ಲಿ ಮರು ಬಿಡುಗಡೆಯಾಗುತ್ತಿದೆ.

.












ಆ ದಿನಗಳು ಚಿತ್ರವನ್ನು ಸಮರ್ಥವಾಗಿ ನಿರ್ದೇಶಿಸಿದ್ದ ಚೈತನ್ಯ ನಿರ್ದೇಶನದ ಹೊಸ ಚಿತ್ರ “ಸೂರ್ಯಕಾಂತಿ” ಈ ವಾರ ಬಿಡುಗಡೆಯಾಗುತ್ತಿದೆ. ಸಂಕ್ರಾಂತಿಗೆ ಬಿಡುಗಡೆಯಾಗುತ್ತಿರುವ ಏಕೈಕ ಹೊಸ ಚಿತ್ರ ಇದು! ಆ ದಿನಗಳು ತಂಡದ ಇನ್ನಿಬ್ಬರು ಸದಸ್ಯರು ಕೂಡ ಈ ಚಿತ್ರದಲ್ಲಿದ್ದಾರೆ. ಒಬ್ಬರು ನಾಯಕ ಚೇತನ್, ಇನ್ನೊಬ್ಬರು ಸಂಗೀತ ನಿರ್ದೇಶಕ ಇಳಯರಾಜಾ! ಈ ಚಿತ್ರದ ಬಗ್ಗೆ ಒಳ್ಳೆಯ ಅಭಿಪ್ರಾಯವಿದ್ದು ಚಿತ್ರ ಯಶಸ್ವಿಯಾದೀತು ಎಂಬ ನಂಬಿಕೆ ಉದ್ಯಮದಲ್ಲಿದೆ!
Starring Chethan, Regina Cassandra
Music Ilaiyaraja
Director KM Chaitanya
Producer Vasu, Sujatha BN













ಮಳೆಯಲಿ ಜೊತೆಯಲಿ (6 ನೇ ವಾರದಲ್ಲಿ — ಸಂತೋಷ್).




NOTE - Now you can also post your comments here itself !
