ಕಳೆದ ವರ್ಷವಿಡೀ ಸೋಲಿನಿಂದ ಕಂಗೆಟ್ಟಿದ್ದ ಚಿತ್ರರಂಗ ವರ್ಷಾಂತ್ಯಕ್ಕೆ ತುಸು ಚೇತರಿಸಿಕೊಂಡಿತ್ತು. ಗಣೇಶ್ ನಟನೆಯ ಮಳೆಯಲಿ ಜೊತೆಯಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಪುನೀತ್ ಅಭಿನಯದ ರಾಮ್ ಕೂಡ ಒಳ್ಳೆಯ ಆರಂಭ ಪಡೆಯುವ ಮೂಲಕ ಭರವಸೆ ಮೂಡಿಸಿದೆ. ಈ ಗೆಲುವಿನ ನಡುವೆಯೂ ಸಾಹಸ ಸಿಂಹ ವಿಷ್ಣು ನಮ್ಮ ನಡುವೆ ಇಲ್ಲ ಎಂಬ ನೋವು ಸದಾ ಕಾಡುತ್ತಿರುತ್ತದೆ… ಗೆಲುವಿದೆ ಆದರೆ ಆ ಗೆಲುವನ್ನು ಸವಿಯುವ ಮನೋಸ್ಥಿತಿಗೆ ಇನ್ನೂ ನಾವು ಬಂದಿಲ್ಲ.. ನೋವು ಇನ್ನೂ ಮಾಸಿಲ್ಲ…
ಸಾಹಸಸಿಂಹ ಡಾ.ವಿಷ್ಣುವರ್ಧನ್ ಅಮೋಘ ಅಭಿನಯದ್, ಅವರ ನಿಧನಕ್ಕೆ ಕೆಲವೇ ದಿನಗಳ ಮೊದಲು ತೆರೆಕಂಡಿದ್ದ “ಬಳ್ಳಾರಿ ನಾಗ” ಈ ವಾರ ಮತ್ತೆ ತೆರೆಯ ಮೇಲೆ ಬರಲಿದೆ. ಸಾಹಸ ಸಿಂಹನ ಅಭಿನಯ ವೈಭವವನ್ನು ಮತ್ತೊಮ್ಮೆ ನೋಡಬಹುದು. ಚಿತ್ರ ಅದೇ ಆದರೂ ಚಿತ್ರ ನೊಡುವ ದೃಷ್ಟಿ ಕೋನ ಬದಲಾಗಲಿದೆ…
.
ಸಮಾಗಮ ಎಂಬ ಹೊಸಬರ ಚಿತ್ರ ಈ ವಾರ ಕಪಾಲಿಯಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದ ಬಗ್ಗೆ ಅಷ್ಟೊಂದು ಭರವಸೆ ಇಲ್ಲದಿದ್ದರೂ ಕನ್ನಡಿಗರ ಕೈ ತಪ್ಪಿ ಹೋಗಿದ್ದ ಕಪಾಲಿ ಚಿತ್ರಮಂದಿರ ಮತ್ತೆ ಕನ್ನಡಿಗರಿಗೆ ಸಿಕ್ಕುವಂತೆ ಮಾಡಿದ ಪುಣ್ಯ ಈ ಚಿತ್ರಕ್ಕೆ ಸಿಗಲಿದೆ.
Starring Vishranth, Shasheel Raj
Music Kiran
Director Kasturi Jagannath
Producer H. Sampath Kumar
ಹೊಸಬರ ಮತ್ತೊಂದು ಚಿತ್ರ “ಪ್ರೀತಿಯ ತೇರು” ಈ ವಾರ ತೆರೆಗೆ ಬರುತ್ತಿದೆ. ಇದರೊಂದಿಗೆ ಭರವಸೆ ಮೂಡಿಸಿದ್ದ ಶಿಶಿರ ಚಿತ್ರವನ್ನು ಪ್ರೇಕ್ಷಕ ಸಾರಾ ಸಗಟಾಗಿ ತಿರಸ್ಕರಿಸಿದ್ದಾನೆ. ಹೊಸ ವರ್ಷದ ಮೊದಲ ಚಿತ್ರಗಳಾದ ಮಿನುಗು ಮತ್ತು ನಾನ್ ಮಾಡಿದ್ ತಪ್ಪಾ ಒಂದೇ ವಾರಕ್ಕೆ ಹೊರ ನಡೆದಿವೆ…
Starring Tanil, Madhumita, Soniya
Music Prasad
Director Prasad
Producer S.Lokesh Reddy

ಮಳೆಯಲಿ ಜೊತೆಯಲಿ (5 ನೇ ವಾರದಲ್ಲಿ — ಸಂತೋಷ್).

NOTE - Now you can also post your comments here itself !

I am waiting for APTARAKSHAKA, that is the last movie, iam interested in kannada, becoz I know that the industry reaching very worst these day, to whom these all films they are making i dont know..
vishnu… i miss you……….