ವರ್ಷಾಂತ್ಯಕ್ಕೆ ಭಾರೀ ಆಘಾತ – ವಿಷ್ಣು, ಸಿ.ಅಶ್ವಥ್ ಕಣ್ಮರೆ !

Published on December 30, 2009 by Akumar   ·   2 Comments

.

ಅಭಿನಯ ಭಾರ್ಗವ ನೀನೆಲ್ಲಿ ಮರೆಯಾದೆ?

ಅಜಾತ ಶತ್ರು ಸಾಹಸ ಸಿಂಹನಿರದ ಚಿತ್ರರಂಗವನ್ನು ಊಹಿಸಲೂ ಅಸಾಧ್ಯ!

Vishnu1

ಹೊಸ ವರ್ಷಕ್ಕೆ ಕಾಲಿಡುವ ಮೊದಲೇ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ಖ್ಯಾತ ಗಾಯಕ ಸಿ. ಅಶ್ವಥ್ ನಿಧನರಾಗಿ 24 ಗಂಟೆ ಕಳೆಯುವುದರೊಳಗಾಗಿ ಮತ್ತೊಂದು ನಿಧನವಾರ್ತೆಯಿಂದ ಕರ್ನಾಟಕ ಕಂಗೆಟ್ಟಿದೆ. ಕನ್ನಡ ಚಿತ್ರರಂಗದ ಕಣ್ಮಣಿ ಕೊಟಿಗೊಬ್ಬ ಡಾ.ವಿಷ್ಣುವರ್ಧನ್ ಚಿರನಿದ್ರೆಗೆ ಜಾರಿದ್ದಾರೆ.  ಅವರಿಲ್ಲದ ಈ ಚಿತ್ರರಂಗದ ತುಂಬೆಲ್ಲ ಸ್ಮಶಾನ ಮೌನ ಆವರಿಸಿದೆ. ಸದಾ ಜನ ಜಂಗುಳಿಯಿಂದ ಕಂಗೊಳಿಸುತ್ತಿದ್ದ ಗಾಂಧೀನಗರ ಈ ಆಘಾತದಿಂದಾಗಿ ಭಣಗುಡುತ್ತಿದೆ… ರಾಜಣ್ಣ ನಂತರ ಚಿತ್ರರಂಗವನ್ನು  ಕೈ ಹಿಡಿದು ಮುನ್ನಡೆಸಬೇಕಾದ ಹಿರಿಯಣ್ಣನೇ ಕಣ್ಮರೆಯಾದ ಮೇಲೆ ಇನ್ನಾರು ದಿಕ್ಕು? ಎಲ್ಲೆಡೆ ದುಃಖ ಮಡುಗಟ್ಟಿದೆ. ಜನರಲ್ಲಿ ಹೊಸವರ್ಷವನ್ನು ಸ್ವಾಗತಿಸುವ  ಉತ್ಸಾಹ ಬತ್ತಿ ಹೋಗಿದೆ…

Vishnu

ವಿಷ್ಣು ನಿಧನದಿಂದಾಗಿ ಡಿಸೆಂಬರ್ 30 ರಂದು ಚಿತ್ರರಂಗ ತನ್ನೆಲ್ಲ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ. ರಾಜ್ಯಾದ್ಯಂತ ಯಾವುದೇ ಚಿತ್ರ ಪ್ರದರ್ಶನವಿರುವುದಿಲ್ಲ. ಚಿತ್ರರಂಗ ತನ್ನ ಅತ್ಯಮೂಲ್ಯ ರತ್ನವನ್ನು ಕಳೆದುಕೊಂಡು ಕಂಬನಿ ಮಿಡಿಯುತ್ತಿದೆ.

ಹೊಸ ವರ್ಷದ ಮೊದಲ ಮೂರು ಚಿತ್ರಗಳು

೧.ಪೋಲೀಸ್ ಕ್ವಾರ್ಟರ್ಸ್:

ಅನೀಶ್, ಸೋನು.

ನಿರ್ದೇಶನ AMR ರಮೇಶ್.

ಸಂಗೀತ- ಜೇಮ್ಸ್ ವಸಂತ್

ಮುಖ್ಯ ಚಿತ್ರ ಮಂದಿರ – ಭೂಮಿಕಾ


೨.ಮಿನುಗು

ತಾರಾಗಣ – ಸುನೀಲ್ ರಾವ್, ಪೂಜಾ ಗಾಂಧಿ.

ನಿರ್ದೇಶನ – A ಜಯಂತ್.

ಸಂಗೀತ- ಗೋಪು

ಮುಖ್ಯ ಚಿತ್ರ ಮಂದಿರ – ತ್ರಿಭುವನ್


೩. ನಾನ್ ಮಾಡಿದ್ ತಪ್ಪಾ?

ಮುಖ್ಯ ಚಿತ್ರ ಮಂದಿರ – ಅನುಪಮ

2010ರಲ್ಲಿ  ತೆರೆಕಂಡ ಒಟ್ಟು ಚಿತ್ರಗಳ ಸಂಖ್ಯೆ 3

.

.

ಮುಂದುವರಿದ ಪ್ರದರ್ಶನ

  • ಶಿಶಿರ : ನರ್ತಕಿ -2 ನೇ ವಾರ
  • ರಾಮ್ : ಸಾಗರ್2 ನೇ ವಾರ
  • ಕಳ್ಳರ ಸಂತೆ : ತ್ರಿವೇಣಿ – 3 ನೇ ವಾರ
  • ಮಳೆಯಲಿ ಜೊತೆಯಲಿ : ಸಂತೋಷ್- 4 ನೇ ವಾರ.

.

ಗಾಂಧೀನಗರದ ಅತ್ಯಂತ ಹಳೆಯ ಚಿತ್ರ

ಮಳೆಯಲಿ ಜೊತೆಯಲಿ (4ನೇ ವಾರದಲ್ಲಿ — ಸಂತೋಷ್).

.MJ4_10_9194

.

ಹೊರ ನಡೆತ್ತಿರುವ ಚಿತ್ರಗಳು

  • ಗೋಕುಲ – ಅನುಪಮದಿಂದ. ಒಟ್ಟು ಪ್ರದರ್ಶನ : 5 ವಾರಗಳು.

.

ಮುಂದಿನ ಬದಲಾವಣೆ

  • ಪ್ರೇಮಿಸಂ
  • ಸುಗ್ರೀವ
  • ಆಪ್ತ ರಕ್ಷಕ

.


NOTE - Now you can also post your comments here itself !

You can also reach me  at:

akumar.reach  at gmail.com

Readers Comments (2)
  1. narasimha says:

    when should come the movie of APTHARAKSHaka

  2. karan arjun says:

    adhehathinte ormakal ennum nilanilkatte

    may his soul rest in peace





Please note: Comment moderation is enabled and may delay your comment. There is no need to resubmit your comment.

Author Info

Author: Akumar

Akumar is a software engineer from Bangalore and an avid movie watcher and reviewer.